Saturday 1 November 2014

ಕಲಿಕೆಗೆ ತರಗತಿಯ ಹೊರತಾದ ವಾತಾವರಣವನ್ನು ಸೃಸ್ಟಿಸುವ ಉದ್ದೇಶದಿಂದ ಸಾಕ್ಷರ ಮಕ್ಕಳಿಗಾಗಿ ನವೋಲ್ಲಾಸ ಬಯಲು ಪ್ರವಾಸ ವನ್ನು ದಿನಾಂಕ  01 -11 -2014  ಶನಿವಾರ ದಂದು ಹಮ್ಮಿಕೊಳ್ಳಲಾಗಿತ್ತು .ಮಕ್ಕಳು ಆಸಕ್ತಿಯಿಂದ ಭಾಗವಹಿಸಿದ ಕಾರ್ಯಕ್ರಮ ಊರಿನ ಪ್ರಸಿದ್ದ ಕಲಾವಿದ ಜಿ .ಕೆ ಭಟ್, ಪೂವಾಳೆ,ಇವರ ಮನೆ 'ಕಲಾಕುಟೀರ'ದಿಂದಆರಂಭವಾಯಿತು.ಕಲಾಕೃತಿಗಳ ವೀಕ್ಷಣೆಯ ಬಳಿಕ ಮುಗೇರು ಭಾಸ್ಕರ ನಾಯಕ್ ರವರ ಗೋಶಾಲೆಯನ್ನು ಸಂದರ್ಶಿಸಿ ಮಾಹಿತಿ ಪಡೆದುಕ್ಕೊಳ್ಳಲಾಯಿತು .
ಮುಂದುವರಿದ ಪ್ರಯಾಣ ಊರಿನ ನದಿಯತ್ತ ಸಾಗಿತು.ನದಿಯಲ್ಲಿ ಸಂತೋಷದಿಂದ ಜಳಕವಾಡಿದಮಕ್ಕಳು  ಕಲಿಕೆ ಹಾಗೂ ಪ್ರಕೃತಿಯ ಸಂಬಂಧವನ್ನು ಅಧ್ಯಾಪಕರಿಗೆ ನನಪಿಸುವಂತಿತ್ತು .ಹಸಿವೆ ಬಾಯಾರಿಕೆಗಳ ಪರಿವೆಯೇ ಇಲ್ಲದೆ ಮಕ್ಕಳು ಪ್ರಕೃತಿಯ  ಮಡಿಲಲ್ಲಿ ಕುಣಿದು ಕುಪ್ಪಳಿಸಿದರು .ಕೊನೆಗೂ ಪ್ರಕೃತಿಯ ಮಡಿಲಲ್ಲಿ ಉಪಾಹಾರ ವನ್ನು ಸ್ವೀಕರಿಸಿದ ಬಳಿಕ ಯಾತ್ರೆಗೆ ಮಂಗಳ ವನ್ನುಹಾಡಲಾಯಿತು .

No comments:

Post a Comment