Friday 14 November 2014

                          ಬಿ .ಎ .ಯು .ಪಿ  ಶಾಲೆ . ಕಾಟುಕುಕ್ಕೆ , ರಕ್ಷಕರ ಸಮ್ಮೇಳನ

 ನವೆಂಬರ್ 14  ನೆಹರು ರವರ ಜನ್ಮದಿನ .ಇವರ ಸ್ಮರಣೆ ಯೊಂದಿಗೆ ಅಪರಾಹ್ನ 2 ರಿಂದ ಶಾಲೆಯಲ್ಲಿ ರಕ್ಷಕರ ಸಮ್ಮೇಳನವನ್ನು ನಡೆಸಲಾಯಿತು .ಶಾಲಾ MPTA  ಅಧ್ಯಕ್ಷೆ  ಶ್ರೀಮತಿ ಸವಿತಾ ಮುಗೇರು ಹಾಗೂ ಸದಸ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ವನ್ನು ಆರಂಭಿಸಲಾಯಿತು .ಮಕ್ಕಳ ಹೆತ್ತವರ ಹಾಜರಾತಿಯೂ ಉತ್ತಮವಾಗಿತ್ತು .ಸ್ವಚ್ಛ ವಿದ್ಯಾಲಯ , ಗುಣಮಟ್ಟದ ವಿದ್ಯಾಲಯ ಮುಂತಾದ ಆಶಯಗಳು ,ಮೌಲ್ಯಗಳನ್ನು ಮತ್ತು ಮನೋಭಾವಗಳನ್ನು  ಬೆಳೆಸುವಲ್ಲಿ ಹೆತ್ತವರ ಪಾತ್ರದ  ಬಗ್ಗೆ ತರಬೇತುದಾರ ಅಧ್ಯಾಪಕ ಗಣೇಶಕುಮಾರ್  ಇವರು  ಸಭೆಯಲ್ಲಿ  ವಿವರಣಾತ್ಮಕಭೋಧನೆಯನ್ನು ನೀಡಿದರು. ಮುಖ್ಯೋ ಪಾಧ್ಯಾಯ  ಶ್ರೀಪತಿ ಭಟ್ ಇವರು ಉಪಸ್ಥಿತರಿದ್ದು ಶಾಲೆಯ ಮುಂದಿನ ಯೋಜನೆಗಳ ಸ್ಥೂಲ ಚಿತ್ರಣದ ಮಾಹಿತಿಯನ್ನು ನೀಡಿದರು. ಹೆತ್ತವರ ಪ್ರತಿಕ್ರಿಯೆಯು ಉತ್ತಮವಾಗಿತ್ತು . ಉಪಸ್ತಿತರೆಲ್ಲರಿಗೂ  ಲಘೂಪಹಾರದ ವ್ಯವಸ್ಥೆ ಮಾಡಲಾಗಿತ್ತು

No comments:

Post a Comment