ಗಾಂಧಿ ಜಯಂತಿ ಆಚರಣೆ
ನಡೆಯಿತು ಇಂದು ಗಾಂಧಿ ಜಯಂತಿ
ರಾಷ್ಟ್ರ ನಾಯಕಗೆ ನಮಿಸುತ್ತ .
ಏರಿತು ದ್ವಜವು ಮೊಳಗಿತು ಗೀತೆ
ನುಡಿಯುತ ಶಪಥವ ಒಗ್ಗೂಡುತ .
ನುಡಿದರು ಶುಚಿತ್ವದ ಮಹತ್ವವನು
ಎಮ್ಮಯ ಶಾಲೆಯ ಪ್ರಭಂದಕರು .
ಪಡೆದರು ವಿಧ ವಿಧ ಮಾನ್ಯಗಳ
ಬಹುಮುಖ ಸ್ಪರ್ಧೆಯ ಸ್ಪರ್ಧಿಗಳು.
ನಡೆಯಿತು ಸ್ವಚ್ಚತ ಅಭಿಯಾನ
ಗಾಂಧಿಯ ಹೆಸರಲಿ ಶ್ರಮದಾನ .
No comments:
Post a Comment